Saturday, 18 March 2017

ಕನ್ನಡ ಕಲಿಯಿರಿ ,

ಕನ್ನಡ ಕಲಿಯಿರಿ ,
 ಕನ್ನಡ ಕಲಿಸಿರಿ ,
ಕನ್ನಡ ಉಳಿಸಿರಿ ,
ಕನ್ನಡ ಬೆಳೆಸಿರಿ .!!!
ವಿನ್ಯಾಸ: ನಾಗೇಶ್ ತಳೇಕರ್ .

ಬಡತನ ಶಾಪವಲ್ಲ

ಬಡತನ ಶಾಪವಲ್ಲ. ಬಡತನವನ್ನು ಸವಾಲಾಗಿ ಸ್ವೀಕರಿಸಿ ಸಕಾರಾತ್ಮಕ ಯೋಚನೆ, ಕಠಿಣ ಪರಿಶ್ರಮ, ಸಾಧಿಸುವ ಛಲ ಹಾಗು ಶೃದ್ದೆಯಿಂದ ಕೆಲಸಮಾಡಿದರೆ ಬಡತದಿಂದ ಹೊರಬರಲು ಸಾಧ್ಯ . ಗುಡಿಸಲಿನಿಂದ ಶ್ವೇತ ಭವನ ಗೆ ಹೋದವರು, ಚಾ ಮಾರುವವರು ಪ್ರಧಾನಮಂತ್ರಿ ಆದ ಮಹಾನ ಸಾಧಕರು ನಮಗೆ ಮಾದರಿ.
- ನಾಗೇಶ್ ತಳೇಕರ್

ನಂಬಿಕೆ

" ಬೆಲೆ ಬಾಳುವ ಚಪ್ಪಲಿಯನ್ನು
 ಬಾಗಿಲ ಹೊರಗೆ ಬಿಡುತ್ತೇವೆ .
 ಭೂತ ಪ್ರೇತ ಬಾಧೆ  ತಗುಲ ಬಾರದೆಂದು   ಕಿತ್ತುಹೋಗಿದ್ದ ಚಪ್ಪಲಿಯನ್ನು ತಲೆ ಹತ್ತರ
 ಇಟ್ಟು ಮಲಗುತ್ತೇವೆ."
- ನಾಗೇಶ್ ತಳೇಕರ್

ಸಜ್ಜನರ ಸಂಗ

ಸಜ್ಜನರ ಸಂಗದಲ್ಲಿಇರುವದೆಂದರೆ ಒಂದು ಸುಗಂಧ ಅಂಗಡಿಯಲ್ಲಿ ಪ್ರವೇಶಿಸಿದಂತೆ....ಸುಗಂಧ ಖರೀದಿಸಿ ಅಥವಾ ಖರೀದಿಸದಿರಿ, ತೇಲಿಬರುವ ಸುಗಂಧ ದ್ರವ್ಯಗಳ ಸುವಾಸನೆ ನಿಮ್ಮ ಮನಸ್ಸನ್ನು ಉಲ್ಲಸಿತಗೊಳಿಸುವುದು ಮಾತ್ರ ನಿಜ .
- ನಾಗೇಶ್ ತಳೇಕರ್

ನಿಜ ಆಪ್ತರು

ಬಾವಿ ಒಣಗಿದಾಗ,
ನಮಗೆ ನೀರಿನ ಮೌಲ್ಯದ  ಅರಿವಾಗುವುದು .
 - ಬೆಂಜಮಿನ್ ಫ಼್ರಾಂಕ್ಲಿನ್,
ಹಣ ಅಧಿಕಾರ ಇಲ್ಲದಾಗ ,
ನಿಜ ನೆಂಟರ ಆಪ್ತರ  ಅರಿವಾಗುವುದು!
- ನಾಗೇಶ್ ತಳೇಕರ್

ವಿಪರ್ಯಾಸ

ವಿಜ್ಞಾನಿಗಳಿಗೆ ಚಂದ್ರ ಮತ್ತು  ಮಂಗಳ ಗ್ರಹದಲ್ಲಿ ಏನಿದೆ ಎಂದು ತಿಳಿಯುವ ಕುತೂಹಲ ಹೆಚ್ಚಾಗಿದೆ.
ಮಹಾನಗರದಲ್ಲಿ ಜನರಿಗೆ ತಮ್ಮ ಪಕ್ಕದಮನೆಯಲ್ಲಿ ವಾಸವಾಗಿರುವರ ಬಗ್ಗೆ ತಿಳಿಯುವ ಕುತೂಹಲ ಇಲ್ಲವಾಗಿದೆ.
. - ನಾಗೇಶ್ ತಳೇಕರ್  .

ಯಶಸ್ಸು

ಬಾನ ಹಾದಿಯಲ್ಲಿ ಸೂರ್ಯ ನಿಧಾನವಾಗಿ ಮೇಲೆ ಬರುವಂತೆ, ಸಕಾರಾತ್ಮಕ ಆಲೋಚನೆ ಹೊಂದವರು ನಿಧಾನವಾಗಿ ಒಂದೊಂದಾಗಿ ಯಶಸ್ಸಿನ ಮೆಟ್ಟಲನ್ನು ಏರುತ್ತಾರೆ.  ಆತ್ಮ ವಿಶ್ವಾಸ , ನಿರ್ದಿಷ್ಟ ಗುರಿ, ಸಾಧಿಸುವ ಛಲ  ಹಾಗೂ ಸತತ ಪ್ರಾಮಾಣಿಕ ಪ್ರಯತ್ನ ಬೇಕು.
- ನಾಗೇಶ್ ತಳೇಕರ್